ಮಕ್ಕಳ ರಕ್ಷಣಾ ಸಮಿತಿ ಕಡ್ಡಾಯ
ಕಾಲೇಜುಗಳಲ್ಲಿ ಹದಿಹರೆಯದವರ ಸುರಕ್ಷತೆಗೆ ಹಲವು ಶಿಫಾರಸು
ಶಾಲಾ- ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ, ಆಪ್ತ ಸಮಾಲೋಚಕರ ನೇಮಕ, ಪಾಲಕರು- ವಿದ್ಯಾರ್ಥಿಗಳ ಸಭೆ ಸೇರಿದಂತೆ ಹದಿಹರೆಯದ ವಿದ್ಯಾರ್ಥಿಗಳ ರಕ್ಷಣೆಗೆ ಕಾನೂನಾತ್ಮಕ ಹಾಗೂ ಮಾನಸಿಕ ಬಂಬಲ ವ್ಯವಸ್ಥೆಗಳನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಆಯೋಗವು ಸೂಚಿಸಿದೆ. ಇದಲ್ಲದೆ, ಇನ್ನೂ ಹಲವು ಶಿಫಾರಸುಗಳನ್ನು ಮಾಡಿದೆ.
ಮಕ್ಕಳ ಹಕ್ಕು
ಆಯೋಗದ ನಿರ್ದೇಶನ ಪಾಲನೆಗೆ ಸೂಚನೆ
ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ಮಕ್ಕಳನ್ನು ದೌರ್ಜನ್ಯ, ಶೋಷಣೆ ಹಾಗೂ ಅಪಾಯಗಳಿಂದ ರಕ್ಷಿಸುವ ಸಂಬಂಧ ಈ ಶಿಫಾರಸು/ನಿರ್ದೇಶನಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.
ಕಾನೂನಾತ್ಮಕ ಹಾಗೂ ರಕ್ಷಣಾತ್ಮಕ ಕ್ರಮಗಳು, ಆಡಳಿತಾತ್ಮಕ ಹಾಗೂ ಸಾಂಸ್ಥಿಕ ಕ್ರಮಗಳು ಮತ್ತು ಮಾನಸಿಕ, ಸಾಮಾಜಿಕ ಬಂಬಲ ಕ್ರಮಗಳಿಂದ ಇವುಗಳನ್ನು ವಿಂಗಡಿಸಲಾಗಿದೆ. ಆಯೋಗದ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ವರದಿ ಸಲ್ಲಿಸುವಂತೆ ಇಲಾಖೆ ಆಯುಕ್ತ ಎನ್. ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳಿಗೆ ಈ ಆದೇಶ ಅನ್ವಯಿಸಿದೆ.
ಕಾನೂನು ಮತ್ತು ರಕ್ಷಣಾತ್ಮಕ
- ಪ್ರತಿ ಕಾಲೇಜಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಬೇಕು. ಇದು 2016ರ ಮಕ್ಕಳ ರಕ್ಷಣಾ ನೀತಿಗೆ ಅನುಗುಣವಾಗಿರಬೇಕು.
- ಪೋಕ್ಸೋ ಅಂಶಯ ಲೈಂಗಿಕ ಅತಿರಾಧದ ಯಾವುದೇ ಮಾಹಿತಿ ದೊರೆತ ತಕ್ಷಣ ಪೊಲೀಸ್ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಕಡ್ಡಾಯವಾಗಿ ವರದಿ ಮಾಡಬೇಕು.
- ವಿದ್ಯಾರ್ಥಿ, ಸಿಬ್ಬಂದಿಗೆ ನಡವಳಿಕೆ ಸಂಹಿತೆ ರೂಪಿಸಬೇಕು.
- ಎಲ್ಲ ಕಾಲೇಜುಗಳ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ- 1098, ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚಯದ ಚಿತ್ರಗಳನ್ನು ಪ್ರದರ್ಶಿಸಬೇಕು.
ಆಡಳಿತಾತ್ಮಕ
ಸಂಸ್ಥಾತ್ಮಕ ಕ್ರಮಗಳು
* ಪ್ರತಿ ಕಾಲೇಜಿನಲ್ಲಿ ಆರ್ಹ ಮಾನಸಿಕ ಆಪ್ತ ಸಮಾಲೋಚಕರ ನೇಮಕ ನಡಸಬೇಕು
* ಪ್ರತಿ ವರ್ಷ ಕನಿಷ್ಠ ಒಂದು ಬಾರಿ ಹದಿಹರೆಯದ ಆರೋಗ್ಯ, ಲೈಂಗಿಕ ಹುರಕ್ಷತೆ, ಆನ್ಲೈನ್ ಸುರಕ್ಷತೆ ಮತ್ತು ಹಾನುನು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು.
* ಎಲ್ಲ ಕಾಲೇಜುಗಳಲ್ಲೂ ಡಿಜಿಟಲ್ ಸಾಕ್ಷರತೆ ಹಾಗೂ ಸೈಬರ್ ಸುರಕ್ಷತಾ ನೀತಿ ಜಾರಿಗೊಳಿಸಬೇಕು. ಮಕ್ಕಳ ಅಶ್ಲೀಲ ವಿಷಯ ಹಾಗೂ ಆನ್ಲೈನ್ ಶೋಷಣೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
* ಪ್ರತಿ ಸೆಮಿಸ್ಟರ್ಗೆ ಕನಿಷ್ಠ ಒಂದು ಬಾರಿ ಪಾಲಕರು- ವಿದ್ಯಾರ್ಥಿಗಳು ಹಾಗೂ ಕೌನ್ಸಿಲರ್ಗಳು ಸಭೆ ನಡೆಸುವುದು ಕಡ್ಡಾಯ.
* ವರ್ಷಕ್ಕೆ ಒಮ್ಮೆ ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯದು 'ತಿರೇದ ಮನೆ' ಕಾರ್ಯಕ್ರಮದ ಅನುಷ್ಠಾನ ಮಾಡಿಸಬೇಕು.
ಮಾನಸಿಕ ಮತ್ತು ಸಾಮಾಜಿಕ ಬಂಬಲ
* ವಿದ್ಯಾರ್ಥಿಗಳಿಗೆ ಪರಸ್ಪರ ಮಾನಸಿಕ ಬಂಬಲದ ವ್ಯವಸ್ಥೆ ಒತ್ತಡ, ಆತಂಕ, ಡಿಪ್ರೆಶನ್ ಮತ್ತು ಆತ್ಮಹತ್ಯಾ ಪ್ರವೃತ್ತಿ ಪತ್ತೆಗೆ ನಿಯಮಿತ ಮಾನಸಿಕ ಆರೋಗ್ಯ ತಪಾಸಣೆ ನಡೆಸಬೇಕು.
* ಯುವಸ್ವಂದನ ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರ ನೆರವು
* ವಿದ್ಯಾರ್ಥಿಗಳಿಗೆ ದೂರು ಪೆಟ್ಟಿಗೆಗಳನ್ನು ನಿರ್ವಹಿಸಬೇಕು.
* ಮಕ್ಕಳ ಮಾನಸಿಕ ಸ್ಥಿತಿ ವಿಶ್ಲೇಷಣೆ, ಸ್ವಸ್ಥತಾ ಸಾಮರ್ಥ್ಯವನ್ನು ಉತ್ತಮಪಡಿಸಲು ಜೀವನ ಕೌಶಲ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು.

Comments
Post a Comment