Skip to main content

ಕೆಕೆಆರ್ ಸಂಘಟಿತ ಬ್ಯಾಟಿಂಗ್ ಸೂಪರ್‌ಜೈಂಟ್ಸ್‌ಗೆ ಸವಾಲಿನ ಗುರಿ | ಲಖನೌ ಚೌಲರ್‌ಗಳ ಶಿಸ್ತಿನ ದಾಳಿ

ಕೋಲ್ಕತ: ಲಖನ್ ಸೂಪರ್ ಜೈಂಟ್ಸ್ ಬೌಲ‌ರ್ ಗಳ ಶಿಸ್ತಿನ ದಾಳಿಯ ನಡುವೆಯೂ ಯುವ ತಾರೆ ಅಂಗಕ್ರಿಷ್ ರಘುವಂಶಿ (45 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಮೂರು ಬಾರಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್ 19ನೇ ಆವೃತ್ತಿಯ ಈಡನ್ ಗಾರ್ಡನ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನ್ ನಾಯಕ ರಿಷಭ್ ಪಂತ್ ಎದುರಾಳಿ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಫಿನ್ ಅಲೆನ್ (9) (9) ವೈಫಲ್ಯದ ನಡುವೆ ನಾಯಕ ಅಜಿಂಕ್ಯ ರಹಾನೆ (41 ರನ್, 24 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಅಂಗಕ್ರಿಷ್ ರಘುವಂಶಿ ಜತೆಯಾಟದಿಂದ ಕೆಕೆಆರ್ ಚೇತರಿಸಿಕೊಂಡಿತು. ನಂತರ ಸ್ಲಾಗ್ ಓವರ್‌ನಲ್ಲಿ ದುಬಾರಿ ವಿದೇಶಿ ಆಲೌಂಡರ್ ಕ್ಯಾಮರಾನ್ 강림 (32* ថ림, 24 2, 3 , 1 ಸಿಕ್ಸರ್) ಹಾಗೂ ರೋವನ್ ಪೊವೆಲ್ (39* 23, 24 2, 4 , 2 ಸಿಕ್ಸರ್) ಉಪಯುಕ್ತ ಜತೆಯಾಟದ ನೆರವಿನಿಂದ ಕೆಕೆಆರ್ 4 ವಿಕೆಟ್‌ಗೆ 181 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ. ಮಿಸ್ಟರಿ ಸ್ಪಿನ್ನರ್ ಸುನೀಲ್ ನಾರಾಯಣ್ ಕೆಕೆಆರ್ ತಂಡಕ್ಕೆ ಮರಳಿದರೆ, ಬ್ಲೆಸಿಂಗ್ ಮುಜರಬಾನಿ ಸ್ಥಾನ ಬಿಟ್ಟುಕೊಟ್ಟರು.

vikramsolar

ಕೆಕೆಆರ್ ಸಂಘಟಿತ ಬ್ಯಾಟಿಂಗ್

ಸೂಪರ್‌ಜೈಂಟ್ಸ್‌ಗೆ ಸವಾಲಿನ ಗುರಿ | ಲಖನೌ ಬೌಲರ್‌ಗಳ ಶಿಸ್ತಿನ ದಾಳಿ

ಕೋಲ್ಕತ: ಲಖನ್ ಸೂಪರ್ ಜೈಂಟ್ಸ್ ಬೌಲ‌ರ್ ಗಳ ಶಿಸ್ತಿನ ದಾಳಿಯ ನಡುವೆಯೂ ಯುವ ತಾರೆ ಅಂಗಕ್ರಿಷ್ ರಘುವಂಶಿ (45 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಮೂರು ಬಾರಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್ 19ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಿದೆ.


ರಹಾನೆ-ಅಂಗಕ್ರಿಷ್ ಆಧಾರ ಕೆಕೆಆರ್ ತಂಡಕ್ಕೆ ನಿರೀಕ್ಷಿತ ಆರಂಭ


ಒದಗಿಸುವಲ್ಲಿ ಫಿನ್ ಅಲೆನ್ ಮತ್ತೆ ವಿಫಲರಾದರು. ಥರ್ಡ್‌ ಮ್ಯಾನ್ ಬೌಂಡರಿ ಗೆರೆ ಬಳಿ ದಿಗೇಶ್ ರಾಥಿ ಪಡೆದ ವಿವಾದಾತ್ಮಕ ಕ್ಯಾಚ್ ಗೆ ಅಲೆನ್ ಡಗೌಟ್ ಸೇರಿದರು. ಇದರೊಂದಿಗೆ ರಹಾನೆ-ಅಲೆನ್ ಜತೆಯಾಟ 15 ರನ್‌ಗಳಿಗೆ ಕೊನೆಗೊಂಡಿತು. ಆಗ, ರಹಾನೆ ಜತೆಗೂಡಿದ ರಘುವಂಶಿ ತಂಡವನ್ನು ಆಧರಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 52 ಎಸೆತಗಳಲ್ಲಿ 84 ರನ್‌ ಗಳಿಸಿ ಕೆಕೆಆ‌ರ್ ಮೊತ್ತ ಏರಿಸಿದರು. ಇವರಿಬ್ಬರ ಜತೆಯಾಟದ ನೆರವಿನಿಂದ ಕೆಕೆಆರ್ ಮೊದಲ ಹತ್ತು ಓವರ್‌ಗಳಲ್ಲಿ 98 ರನ್‌ಗಳಿಸಿ 200 ಪ್ಲಸ್ ರನ್ ಸೇರಿಸುವ ನಿರೀಕ್ಷೆ ಮೂಡಿಸಿತು. ದಿಗೇಶ್ ರಾಥಿ 11ನೇ ಓವರ್‌ನಲ್ಲಿ ರಹಾನೆ ವಿಕೆಟ್ ಪಡೆದರೆ, ಮರು ಓವರ್‌ನಲ್ಲಿ ಅಂಗಕ್ರಿಷ್, ಎಂ. ಸಿದ್ದಾರ್ಥ್‌ಗೆ ವಿಕೆಟ್ ಒಪ್ಪಿಸಿದರು. ಈ

ಮೂಲಕ ಲಖನೌ ಬೌಲರ್‌ಗಳು ಕೆಕೆಆರ್ ರನ್‌ಗಳಿಕೆಗೆ ನಿಯಂತ್ರಣ ಹೇರಿದರು.

ಕೆಕೆಆರ್: 4 ವಿಕೆಟ್‌ಗೆ 181

ಅಜಿಂಕ್ಯ ರಹಾನೆ ಸಿ ಶಮಿ ಬಿ ದಿಗ್ಗೇಶ್ ಫಿನ್ ಅಲೆನ್ ಸಿ ದಿಗೇಶ್ ಬಿ ಪ್ರಿನ್ಸ್

ಕ್ಯಾಮರಾನ್ ಗ್ರೀನ್ ಔಟಾಗದೆ ರಿಂಕು ಸಿಂಗ್ ಬಿ ಆವೇಶ್ ಖಾನ್

41

9

39

ಅಂಗಕ್ರಿಷ್ ಸಿ ಮಾಕ್ರ್ರಮ್ ಬಿ ಸಿದ್ದಾರ್ಥ್ 45 32 4

ರೋನ್ ಪೊವೆಲ್ ಔಟಾಗದೆ

ಇತರ 11 ವಿಕೆಟ್ ಪತನ : 1-15, 2-99, 3-105, 4-111. ಬೌಲಿಂಗ್  ಮೊಹಮದ್ ಶಮಿ :  4-0-27-0, & ಪ್ರಿನ್ಸ್  ಯಾದವ್ 4-0-47-1, ಎಂ ಸಿದ್ಧಾರ್ಥ್ . 4-0-34-1, ದಿಗ್ವೇಶ್  ರಥ್  4-0-25-1. ಅವೆಷ್ 4-0-44-1.

ಮೊತ್ತ ಏರಿಸಿದ ಪೊವೆಲ್-ಗ್ರೀನ್ 

ರಹಾನೆ-ಅಂಗಕ್ರಿಷ್ ನಿರ್ಗಮನ ನಂತರ ಕೆಕೆಆರ್ ರನ್‌ಗತಿ ಕುಸಿಯಿತು. ಮಿನಿ ಹರಾಜಿನಲ್ಲಿ ₹25.20 ಕೋಟಿಗೆ ಸೇಲಾಗಿರುವ ಕ್ಯಾಮರಾನ್ ಗ್ರೀನ್ ತಾನೆದುರಿಸಿದ ಮೊದಲ 20 ಎಸೆತಗಳಲ್ಲಿ 20 ರನ್ ಮಾತ್ರಗಳಿಸಿದರು. ಉಪನಾಯಕ ರಿಂಕು ಸಿಂಗ್ (4), ಆವೇಶ್ ಖಾನ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಗ್ರೀನ್ ಜತೆಯಾದ ವಿಂಡೀಸ್‌ನ ಪೊವೆಲ್ ರನ್‌ಗಳಿಕೆಗೆ ಚುರುಕು ನೀಡಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್‌ಗೆ 40 ಎಸೆತಗಳಲ್ಲಿ 70 ರನ್ ಕಸಿದರು. ಸ್ಲಾಗ್ ಓವರ್‌ಗಳಲ್ಲಿ ಲಯಕ್ಕೆ ಮರಳಿದ ಗ್ರೀನ್, ಪೊವೆಲ್ ಬೆಂಬಲದೊಂದಿಗೆ ಉಪಯುಕ್ತ ಆಟವಾಡಿದರು. ಕೊನೇ ಐದು ಓವರ್ ಗಳಲ್ಲಿ ಲಖನೌ ಬೌಲರ್ಸ್ 66 ರನ್ ಬಿಟ್ಟುಕೊಟ್ಟರು.


ಅಂಪೈರ್ ವಿವಾದಾತ್ಮಕ ತೀರ್ಪು!


ಕೆಕೆಆರ್-ಲಖನೌ ಪಂದ್ಯದಲ್ಲೂ ಅಂಪೈರ್‌ಗಳು ಎಡವಟ್ಟು ಮಾಡಿದ್ದಾರೆ. ಎರಡನೇ 1 ಓವರ್‌ನಲ್ಲಿ ಫಿನ್‌ ಅಲೆನ್ ಬಾರಿಸಿದ ಚೆಂಡನ್ನು ಥರ್ಡ್‌ ಮ್ಯಾನ್ ಬೌಂಡರಿ ಗೆರೆ ಬಳಿ ದಿಗೇಶ್ ರಾಥಿ ಕ್ಯಾಚ್ ಪಡೆದರು. ಆದರೆ, ಬೌಂಡರಿ ಗೆರೆಗೆ ಹತ್ತಿರಲ್ಲಿ ರಾಥಿ ಚೆಂಡನ್ನು ಪಡೆದ ನಂತರ ಕ್ಯಾಚ್ ಪಡೆದ ರೀತಿಯ ವಿಸ್ತ್ರತ ಪರಿಶೀಲನೆ ನಡೆಸದೆ ಔಟ್ ಎಂದು ತೀರ್ಪು

ನೀಡಲಾಯಿತು. ಕ್ಯಾಚ್ ಪಡೆದ ದೃಶ್ಯಾವಳಿ ಮರು ಪ್ರಸಾರದಲ್ಲಿ, ರಾಥಿಯ ಎಡಗಾಲು ಬೌಂಡರಿ ಗೆರೆಯನ್ನು ಸ್ವಲ್ಪ ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ


Comments

Popular posts from this blog

ಅಕಾಡೆಮಿಕ್ ಅಸೋಸಿಯೇಟ್ ನೇಮಕಾತಿ – ಹಂತ ಹಂತವಾಗಿ ವಿವರ

 ಅಕಾಡೆಮಿಕ್ ಅಸೋಸಿಯೇಟ್ ನೇಮಕಾತಿ – ಹಂತ ಹಂತವಾಗಿ ವಿವರ ಬೆಂಗಳೂರು ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ( IIM ) ಸಂಸ್ಥೆಯು “ಅಕಾಡೆಮಿಕ್ ಅಸೋಸಿಯೇಟ್” ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಅಧ್ಯಾಪಕರಿಗೆ ಸಹಾಯ ಮಾಡುವ ಕೆಲಸ, ಸಂಶೋಧನಾ ಕಾರ್ಯ, ಡೇಟಾ ವಿಶ್ಲೇಷಣೆ, ತರಗತಿ ನಿರ್ವಹಣೆ ಹಾಗೂ ವಿದ್ಯಾರ್ಥಿ ಸಂಬಂಧಿತ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಈಗ ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ನೋಡೋಣ. 1. ಸಂಸ್ಥೆಯ ಹೆಸರು ಈ ನೇಮಕಾತಿಯನ್ನು ನಡೆಸುತ್ತಿರುವ ಸಂಸ್ಥೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIM Bangalore) ಇದು ಭಾರತದ ಪ್ರಮುಖ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಕೆಲಸ ಮಾಡುವುದರಿಂದ ಉತ್ತಮ ಅನುಭವ ಹಾಗೂ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಬಹುದು. 2. ಹುದ್ದೆಯ ಹೆಸರು ನೇಮಕಾತಿಯ ಹುದ್ದೆ: ಅಕಾಡೆಮಿಕ್ ಅಸೋಸಿಯೇಟ್ ( Academic Associate) ಈ ಹುದ್ದೆಯಲ್ಲಿ ಅಭ್ಯರ್ಥಿಗಳು ಅಧ್ಯಾಪಕರಿಗೆ ಸಹಾಯ ಮಾಡುವ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸಬೇಕು. 3. ಹುದ್ದೆಗಳ ಸಂಖ್ಯೆ ಜಾಹೀರಾತಿನ ಪ್ರಕಾರ ಹಲವು ಹುದ್ದೆಗಳು ಖಾಲಿ ಇದ್ದು, ವಿಭಾಗಗಳ ಅವಶ್ಯಕತ...

ಗೆಲ್ಲುವ ಛಲದಲ್ಲಿ ಮುಂಬೈ ಇಂಡಿಯನ್ಸ್

 ಗುವಾಹಟಿ (ಪಿಟಿಐ): ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ. ಗೆಲುವಿನ ಹಾದಿಗೆ ಮರಳುವ ಛಲದಲ್ಲಿರುವ ಮುಂಬೈ ತಂಡದ ನಾಯಕ ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದಿಂದ ಪೂರ್ಣ ಚೇತರಿಸಿಕೊಂಡು ಕಣಕ್ಕಿಳಿಯುವ ನಿರೀಕ್ಷೆ ಗರಿಗೆದರಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ತಂಡವು ಜಯಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಆಡಿರಲಿಲ್ಲ. ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಮುಂದಾಳತ್ವ ವಹಿಸಿದ್ದರು. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ತಂಡವೂ ಸೋತಿತ್ತು. + ಕಳೆದ ಪಂದ್ಯದಲ್ಲಿ ಹಾರ್ದಿಕ್ ಬದಲಿಗೆ ಅಲ್‌ರೌಂಡರ್ ದೀಪಕ್ ಚಾಹ‌ರ್ ಅವರನ್ನು ಅಡಿಸಲಾಯಿತು. ಅವರು ಉತ್ತಮ ಬೌಲಿಂಗ್‌ ಮಾಡಿದರು. ಆದರೆ ಎಡಗೈ ವೇಗಿ ಟ್ರೆಂಟ್ ಬೌಲ್ಸ್ ಬದಲಿಗೆ ವೇಗದ ಬೌಲಿಂಗ್ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ಕಣಕ್ಕಿಳಿಸಿದ್ದು ಮುಂಬೈಗೆ ತಿರುಗುಬಾಣವಾಯಿತು. ಅವರು ಹೆಚ್ಚು ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಶಾರ್ದೂಲ್ ಠಾಕೂ‌ರ್ ಕೂಡ ಹೆಚ್ಚು ರನ್ ಕೊಟ್ಟಿದ್ದರು. ಜಸ್‌ಪ್ರೀತ್ ಬೂಮ್ರಾ ಬಿಗಿದಾಳಿ ನಡೆಸಿದ್ದರು. ಆದರೆ ವಿಕೆಟ್ ಪಡೆದಿರಲಿಲ್ಲ. ಅದರಿಂದಾಗಿ ಮಧ್ಯ-ಮವೇಗಿಯೊಬ್ಬರ ಅಗತ್ಯ ತಂಡಕ್ಕೆ ಇದೆ. ಅದಕ್ಕಾಗಿಯೇ ಈಗ ಮುಂಬೈ ಬಳಗದ ಮ್ಯಾನೇಜ್‌ಮೆಂಟ್ ಚಿತ್ತ ಹಾರ್ದಿಕ್ ಅವರತ್ತ ಇದೆ. ಪಾಂಡ್ಯ ತಂಡದೊಂದಿಗೆ ಗುವಾಹಟಿಗೆ ಬಂದಿದ್ದಾರೆ. ನೆಟ್‌ನಲ್ಲಿಯೂ ಒಂದಿ...

ಎನ್‌ಎಂಡಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ – ಹಂತ ಹಂತವಾಗಿ ಸಂಪೂರ್ಣ ಮಾಹಿತಿ

 ಎನ್‌ಎಂಡಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ – ಹಂತ ಹಂತವಾಗಿ ಸಂಪೂರ್ಣ ಮಾಹಿತಿ ಭಾರತದ ಪ್ರಮುಖ ಗಣಿಗಾರಿಕಾ ಸಂಸ್ಥೆಯಾದ ಎನ್‌ಎಂಡಿಸಿ (NMDC) ಸಂಸ್ಥೆಯಲ್ಲಿ ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ವೇತನ, ಸ್ಥಿರ ಉದ್ಯೋಗ ಹಾಗೂ ಸರ್ಕಾರಿ ಸೌಲಭ್ಯಗಳ ಕಾರಣದಿಂದ ಸಾವಿರಾರು ಅಭ್ಯರ್ಥಿಗಳು ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದ್ದರಿಂದ ಅಭ್ಯರ್ಥಿಗಳು ಸರಿಯಾದ ಮಾಹಿತಿಯನ್ನು ತಿಳಿದು ಹಂತ ಹಂತವಾಗಿ ಅರ್ಜಿ ಸಲ್ಲಿಸುವುದು ಬಹಳ ಮುಖ್ಯವಾಗಿದೆ. ಹಂತ 1: ನೇಮಕಾತಿ ಅಧಿಸೂಚನೆ ಓದುವುದು ಮೊದಲಿಗೆ ಅಭ್ಯರ್ಥಿಗಳು ಎನ್‌ಎಂಡಿಸಿ ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು. ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಧಿಸೂಚನೆಯನ್ನು ಸರಿಯಾಗಿ ಓದದೇ ಅರ್ಜಿ ಸಲ್ಲಿಸಿದರೆ ನಂತರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡಬೇಕು. ಹಂತ 2: ಅರ್ಹತೆ ಪರಿಶೀಲನೆ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯನ್ನು ಪರಿಶೀಲಿಸಬೇಕು. ಸಾಮಾನ್ಯವಾಗಿ ಮೆಕ್ಯಾನಿಕಲ್, ಸಿವಿಲ...